ಜಯಪುರ: ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರದಿಂದ ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಳಾನೆ ಗ್ರಾಮದ ಮುನ್ನೂರ್ ಪಾಲುವಿನಲ್ಲಿ ಲಕ್ಷೀ ದೇವಿಯವರ ಮನೆಯ ಪಕ್ಕದ ಧರೆ ಕುಸಿದು ಮನೆಯ ಗೋಡೆಗೆ ಹಾನಿಯಾಗಿದೆ.
ಗೋಡೆಗೆ ಹಾನಿಯಾಗಿ ಮನೆಯ ಗೋಡೆಯೂ ಕುಸಿಯುವ ಆತಂಕ ಎದುರಾಗಿದೆ. ಸ್ಥಳಕ್ಕೆ ಅಗಳಗಂಡಿ ಪಂಚಾಯತಿಯವರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
