ಚಿಕ್ಕಮಗಳೂರು : ಬೋವಿ ಸಮಾಜದ ಮುಖಂಡರಿಂದಲೇ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆಸಿರೋ ಘಟನೆ ನಡೆದಿದೆ.ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಟ್ಟಣದ ಐಬಿಯಲ್ಲಿ ನಡೆದಿದೆ.
ಅವಧೂತ ಮಠದ ಗಂಗಾಧರ್ ಸ್ವಾಮೀಜಿ ಮೇಲೆ ಸಮಾಜದ ಮುಖಂಡರಿಂದಲೇ ಹಲ್ಲೆ ಯತ್ನ ನಡೆದಿದೆ. ಬೋವಿ ಸಮಾಜದ ಅಧ್ಯಕ್ಷ ಸೇರಿದಂತೆ 6 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ. ಬೋವಿ ಸಮಾಜದ ಸ್ವಾಮೀಜಿ ಮೇಲೆ ಜೊತೆಗಿದ್ದ ಮುಖಂಡರಿಂದಲೇ ಹಲ್ಲೆ ನಡೆದಿದೆಯಾ ಗೊತ್ತಾಗಬೇಕಿದೆ.
ಈ ಸಂಬಂಧ ಕಡೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.
