ಚಿಕ್ಕಮಗಳೂರು : ಹಿಂದೂ ಕಾರ್ಯಕರ್ತರಿಗೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧಮ್ಕಿ, ನಡವಳಿಕೆಯನ್ನು ಖಂಡಿಸಿ ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಇನ್ಸ್ ಪೆಕ್ಟರ್ ಧನಂಜಯ್ ಮಾತು-ವರ್ತನೆ ಅಹಂಕಾರದಿಂದ ಕೂಡಿದೆ ಧನಂಜಯ್ ಅವರದು ಖಾಕಿ ತೊಟ್ಟು ಗೂಂಡಾಗಿರಿ ಮಾಡುವ ವರ್ತನೆ ಈ ದೇಶದಲ್ಲಿ ಯಾವ ಬೀದಿಯೂ ನಿಷೇಧಿತ ಬೀದಿಯಲ್ಲ ಮಸೀದಿ ಇದೆ ಅಂತ ಮೆರವಣಿಗೆ ಹೋಗ್ಬಾರ್ದು ಅಂದ್ರೆ ನಿಮ್ಮ ಭಯ ತೋರ್ಸುತ್ತೆ ಸಾರ್ವಜನಿಕ ಸ್ಥಳದಲ್ಲಿ ಮೆರವಣಿಗೆ ಹೋಗಬಾರದು ಎನ್ನುವುದೇ ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆ ದೊಡ್ಡ ದೊಡ್ಡ ಮಾತುಗಳನ್ನಾಡಿದ್ದಾರೆ, ಈ ಧಮ್ಕಿಯಲ್ಲ ನಡೆಯುವುದಿಲ್ಲಈ ರೀತಿ ಧಮ್ಕಿ ಹಾಕುವರನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ ಇನ್ಸ್ ಪೆಕ್ಟರ್ ಧನಂಜಯ್ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಪೂರ್ವಕ ಮನವಿ ಮಾಡಿದರು.
ಅದೇ ರೀತಿ ಅಮಾನತ್ತು ಮಾಡದಿದ್ದರೆ ಖರ್ಗೆಯವರು ಪಕ್ಷಪಾತಿಗಳು ಎಂಬ ಭಾವನೆ ಬರುತ್ತೆಇದೇ ಧಮ್ಕಿಯನ್ನ ಅನ್ಯಕೋಮಿನವರಿಗೆ ಹಾಕಿದ್ರೆ ಏನೋ ಆಗಿದೆ ಎಂಬಂತೆ ಬಾಯಿ ಬಡ್ಕೊತ್ತಿದ್ರಿ ನಿಮ್ಮ ಮೌನ ಜಾತ್ಯಾತೀತತೆಯ ವಿರುದ್ಧ ಇರುವ ಒಂದು ಅಸ್ತ್ರ, ನಿಮ್ಮ ಜಾತ್ಯತೀತತೆ ಈ ವಿಚಾರದಲ್ಲಿ ಸತ್ತು ಹೋಗಿದೆ ಜನ ಹಾಗೂ ಕಾರ್ಯಕರ್ತರು ಅಪೇಕ್ಷೆ ಪಟ್ಟರೇ ನಾವೇ ಬಂದು ನಿಲ್ತೀವಿ, ಯಾವನು ಏನು ಮಾಡಿಕೊಳ್ತಾನೆ ನೋಡ್ತಿವಿ ಎಂದು ಎಂದು ಕಿಡಿಕಾರಿದ್ದಾರೆ
