ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿಬ ಶ್ರೀ ರಂಭಾಪುರಿ ಪೀಠದಲ್ಲಿ ದಶಮಾನೋತ್ಸವ ಹಾಗೂ ಕ್ಷೇತ್ರದ ವೀರಭದ್ರಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆದಿದ್ದು ಮಠದ ಜಾತ್ರೆಯು ಮನ ತುಂಬಿದೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ರಭಾಪುರಿ ಮಠದ ಸ್ವಾಮಿಗಳ ಆಶೀರ್ವಾದ ಪಡೆದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಇಂದು ಅವರಿಗೆ ಅನ್ಯಾಯ ಮಾಡ್ತಿದ್ದಾರೆ. ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿ, ಯುವ ಸಮೂಹವನ್ನು ಕಡೆಗಣಿಸಿದ್ದಾರೆ. ಮೊನ್ನೆ ಧಾರವಾಡದಲ್ಲಿ ನೋಡಿದ್ದೀರಿ, ಖಾಲಿ ಉದ್ಯೋಗ ಭರ್ತಿ ಮಾಡಬೇಕು ಅಂತಾ ಯುವಕರು ಒತ್ತಾಯಿಸಿದ್ದಾರೆ. 2.80 ಲಕ್ಷಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿ ಆಗದೆ ಖಾಲಿ ಇವೆ. ಬೇಗ ಹುದ್ದೆ ಭರ್ತಿ ಮಾಡಿ ಅಂತಾ ಕೇಳಿದರೇ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರೆ. ರೈತರು ಹತಾಶರಾಗಿದ್ದಾರೆ, ಯುವ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಯುವ ಸಮೂಹ ದಂಗೆ ಏಳುತ್ತಾರೆ ಎಂದರು.
