ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷದ ಬಗ್ಗೆ ಮಾಜಿ ಸಚಿವ ಜಮೀರ್ಗೆ ಕೃತಜ್ಞತೆ ಇರಲಿ, ಧರ್ಮದ ಹೆಸರಿನ ಹೋರಾಟ ಸರಿಯಲ್ಲ ಎಂದು ಮಾಜಿ ಸಚಿವ ಜಮೀರ್ ಬೆಂಬಲಿಗರಿಗೆ ಪ್ರದೇಶ ಕಾಂಗ್ರೆಸ್ ಕಿಸಾನ್ ಘಟಕದ ಸಂಚಾಲಕ ಸಿ ಎನ್ ಅಕ್ಮಲ್ ಟಾಂಗ್ ಕೊಟ್ಟಿದ್ದಾರೆ.
ಹೌದು .. ಚಿಕ್ಕಮಗಳೂರಿನ ಧರ್ಮದ ಹೆಸರಿನ ಹೋರಾಟ ಸರಿಯಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಮುಸ್ಲಿಂ ನಾಯಕರನ್ನು ಮೂಲೆಗುಂಪು ಮಾಡಿಲ್ಲ ಯು.ಟಿ. ಖಾದರ್ ಅವರಿಗೆ ಈಗಾಗಲೇ ಅವಕಾಶ ಸಿಕ್ಕಿದೆ, ಇತರರಿಗೂ ಅವಕಾಶ ಸಿಗಲಿದೆ ಜಮೀರ್ ಅಹಮದ್ ಖಾನ್ ಅವರಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ ಜಮೀರ್ ಪರವಾಗಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ಸರಿಯಲ್ಲ ರಾಜಕಾರಣದಲ್ಲಿ ಧರ್ಮ ತರುವುದು ನಾಚಿಕೆಗೇಡಿನ ಸಂಗತಿ ಎಂದರು.
ಹಾಗೆ ಜಾಮಿಯಾ ಕಮಿಟಿ ಪ್ರತಿಭಟನೆ ಕುರಿತು ಪರೋಕ್ಷ ಟೀಕೆ ಮಾಡಿದ್ದು ಜಮೀರ್ ಅಹಮದ್ ಹಲವು ಮುಸ್ಲಿಂ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಅಜೀಜ್ ಸೇಠ್, ಶಫಿ ಅಹಮದ್ ಅವರ ಸೇವೆಯನ್ನು ಸ್ಮರಿಸಿದ ಅಕ್ಮಲ್ ಬಡಮಖಾನ್ ದರ್ಗಾದಲ್ಲಿ ಡಿಕೆಶಿ ಪರವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹೇಳಿದರು.
