ಹಾಸನ : ಹಾಡಹಗಲೇ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಚನ್ನಪಟ್ಟಣ ಬೈಪಾಸ್ನಲ್ಲಿ ನಡೆದಿದೆ.

ಕಪ್ಪೆ, ಮಣಿ ಅಲಿಯಾಸ್ ಮಣಿಕಂಠ (35) ಕೊಲೆಯಾದ ವ್ಯಕ್ತಿಯಾಗಿದ್ದು ಹಾಸನ ತಾಲ್ಲೂಕಿನ, ಕಟ್ಟಾಯ ಹೋಬಳಿ, ಕಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದನು.ಆದರೆ ಹಾಸನದ ಸಿದ್ಧಯ್ಯನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ ಮಣಿಕಂಠ ನಗರದ 80 ಅಡಿ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದನು.
ಮಧ್ಯಾಹ್ನ 2 ಸುಮಾರಿನಲ್ಲಿ ಗೃಹಪ್ರವೇಶ ಇದೆ ಎಂದು ಹೇಳಿ ಪೆಟ್ರೋಲ್ ಬಂಕ್ನಿಂದ ತೆರಳಿದ್ದ ಮಣಿಕಂಠ ಈ ವೇಳೆ ಕೊಲೆ ಮಾಡಿ ಎಸ್ಕೇಪ್ ಆಗಿರುವ ಹಂತಕರು ಸ್ಥಳಕ್ಕೆ ಎಸ್ಪಿ ಶುಭನ್ವಿತಾ, ಸೋಕೋ ತಂಡ ಭೇಟಿ, ಪರಿಶೀಲನೆ ನಡೆಸಿದ್ದಾರೆ.
