ಚಿಕ್ಕಮಗಳೂರು : ಮಲೆನಾಡಲ್ಲಿ ಮುಂದುವರಿದ ಭಾರೀ ಗಾಳಿ-ಮಳೆ ಅಬ್ಬರ ಒಂದೇ ದಿನಕ್ಕೆ 165 ಮಿ.ಮೀ. ಹತ್ರತ್ರ 7 ಇಂಚು ಮಳೆ ಕಂಡಿದ್ದು ಮಾತ್ರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ.
ಹೌದು .. ಗಾಳಿ-ಮಳೆಯ ಅಬ್ಬರ ಕಂಡು ಮಲೆನಾಡಿಗರು ಕಂಗಾಲಾಗಿದ್ದು ಭಯಭೀತರಾದ ಜನ.ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ರಣ ಗಾಳಿ ಬೀಸುತ್ತಿದ್ದು ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರ ಪರದಾಟ
ಗಾಳಿ ಜೊತೆ ಒಂದೇ ಸಮನೆ ಬಿಟ್ಟು-ಬಿಟ್ಟು ಸುರಿಯುತ್ತಿರೋ ಮಳೆಗೆ ಅಳಿದುಳಿದ ಕಾಫಿ-ಮೆಣಸು ನೆಲಕಚ್ಚೋ ಆತಂಕದಲ್ಲಿ ಬೆಳೆಗಾರರು ಹಾಗೆ ಮಲೆನಾಡಲ್ಲಿ ಜನವರಿಯಿಂದಲೂ ಆಗಾಗ್ಗೆ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ಮಾತ್ರ ನಿಜಕ್ಕೂ ಗಾಬರಿಗೊಳಿಸುತ್ತೆ!
