ಶೃಂಗೇರಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಹೊಸದಾಗಿ ಅಧ್ಯಕ್ಷರಾದ ನಂತರ ಇದೆ ಮೊದಲೇ ಬಾರಿಗೆ ತಾಲ್ಲೂಕು ಸಮಿತಿ ಹೊಸಬರನ್ನ ನೇಮಕ ಮಾಡಿ ಆದೇಶ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಮೇಶ್ ಭಟ್ 12 ವರ್ಷಗಳ ನಂತರ ತಾಲ್ಲೂಕು ಸಮಿತಿ ಕಾರ್ಯಧ್ಯಕ್ಷರನ್ನಾಗಿ ಅಜಿತ್ ಅಣ್ಕುಳಿ, ಕಾರ್ಯದರ್ಶಿಗಳಾಗಿ ಸುಂದ್ರೇಶ್ ಮಂಡಗದ್ದೆ, ತ್ರಿಮೂರ್ತಿ ಹೊಸತೋಟ, ಕಿಗ್ಗಾ ಹೋಬಳಿ ಅಧ್ಯಕ್ಷರಾಗಿ ರಾಜ್ ಕುಮಾರ್ ಯಡದಳ್ಳಿ, ಕಸಬಾ ಹೋಬಳಿ ಅಧ್ಯಕ್ಷರಾಗಿ ಲಕ್ಷ್ಮೀಶ್ ಅಣ್ಕುಳಿ, ಖಜಾಂಚಿಯಾಗಿ ಸುಬ್ರಮಣ್ಯ ಭಟ್ ಅಂಬಲಮನೆ ಯವರನ್ನ ಜೊತೆಗೆ ಸಹ ಕಾರ್ಯದರ್ಶಿಗಳು, ಉಪಾಧ್ಯಕ್ಷರುಗಳು , ಸಂಘಟನಾ ಕಾರ್ಯದರ್ಶಿಗಳು , ಸಾಂಸ್ಕೃತಿಕ ಕಾರ್ಯದರ್ಶಿಗಳು , ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಪಕ್ಷವನ್ನು ಸಂಘಟಿಸುವ ಸಲುವಾಗಿ ಹೋಬಳಿ ಹಾಗೂ ಪಂಚಾಯತ್ ಮಟ್ಟದಲ್ಲಿ ಹೊಸ ಸಮಿತಿಗಳನ್ನ ಮಾಡಲಾಗುವುದು ಎಲ್ಲಾ ಕಾರ್ಯಕರ್ತರಿಗೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
