ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಾಂಗ್ರೆಸ್ ಪಾಳಯದಲ್ಲಿ ಶುರುವಾದ ಶಿಥಲ ಸಮರ ಇದೀಗ ತಾರಕ್ಕಕ್ಕೇರಿದ್ದು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಮಾಜಿ ಶಾಸಕ ಕುಮಾರಸ್ವಾಮಿ ಅವರು, ಶಾಸಕಿ ನಯನಾ ಮೋಟಮ್ಮ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಹಾಗೂ ಪಕ್ಷದ ಹಿರಿಯ ಮುಖಂಡರ ನಡುವಿನ ಭಿನ್ನಮತ ಸ್ಫೋಟಗೊಂಡಿದ್ದು ಹಿಂದೆ ಪದಾಧಿಕಾರಿಗಳು-ಎಂಎಲ್ಎ ಒಟ್ಟೊಟ್ಟಿಗೆ ಹೋಗ್ತಿದ್ದೆವು ಆದರೆ ಈಗ ಆ ಸಂಪ್ರದಾಯವನ್ನ ನಯನಾ ಮೋಟಮ್ಮ ಪಾಲಿಸ್ತಿಲ್ಲ .ನನಗೆ ನಯನಾ ಮೋಟಮ್ಮ ತುಂಬಾ ಜ್ಯೂನಿಯರ್ ಜಾತಿ ವಿಚಾರ ಇಟ್ಕೊಂಡು ಮಾತಾಡ್ತಾರೆ ಎಂದು ಶಾಸಕಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ ಲಾಭಿ ಮಾಡಿ ಟಿಕೆಟ್ ತರುವ ಕಾಲ ಹೋಯ್ತು.ನನಗೆ ನಯನಾ ಮೋಟಮ್ಮ ತುಂಬಾ ಜ್ಯೂನಿಯರ್ ಪಕ್ಷದ ಹಿರಿಯ ಮುಖಂಡರನ್ನ ನಯನಾ ಮೋಟಮ್ಮ ಅವರು ಸಂಪೂರ್ಭವಾಗಿ ಕಡೆಗಣಿಸುತ್ತಿದ್ದಾರೆ.ಯಾವುದೇ ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ನಾನು ನಯನಾ ಮೋಟಮ್ಮಗೆ ಬುದ್ದಿ ಹೇಳಲ್ಲ ಎಂದು ತಿಳಿಸಿದ್ದಾರೆ.
