Saturday, July 18, 2026
Homeಕ್ರೈಮ್ಮೂಡಿಗೆರೆ: ತಂದೆಯ ಸಾವಿನ ಪ್ರತೀಕಾರ ತೀರಿಸಲು ಪೊಲೀಸ್ ಠಾಣೆಗೆ ಕತ್ತಿ ಹಿಡಿದುಕೊಂಡು ಬಂದ ಮಗ!

ಮೂಡಿಗೆರೆ: ತಂದೆಯ ಸಾವಿನ ಪ್ರತೀಕಾರ ತೀರಿಸಲು ಪೊಲೀಸ್ ಠಾಣೆಗೆ ಕತ್ತಿ ಹಿಡಿದುಕೊಂಡು ಬಂದ ಮಗ!

Telegram Group
Join Now

ಮೂಡಿಗೆರೆ: ವೆಲ್ಡಿಂಗ್ ವಿಚಾರದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಈ ಬೆನ್ನಲ್ಲೇ ಪೊಲೀಸ್ ಠಾಣೆಯ ಒಳಗೆ ಸೇಡು ತೀರಿಸಿಕೊಳ್ಳಲು ಮೃತ ವ್ಯಕ್ತಿಯ ಪುತ್ರ ಕತ್ತಿ ಹಿಡಿದು ದಾಂಧಲೆ ನಡೆಸಿರುವ ಆಘಾತಕಾರಿ ಘಟನೆಗಳು ವರದಿಯಾಗಿವೆ.

ಮೂಡಿಗೆರೆ ಬೇಲೂರು ರಸ್ತೆಯ ಗ್ಯಾರೇಜ್ ಮಾಲೀಕ ಸೈಯದ್ ಜಾವಿದ್ ಎಂಬುವವರ ಮೇಲೆ ರಾಜು ಎಂಬಾತ ವೆಲ್ಡಿಂಗ್ ವಿಚಾರವಾಗಿ ಗಲಾಟೆ ನಡೆಸಿ, ಅವರ ಎದೆಭಾಗಕ್ಕೆ ರಭಸವಾಗಿ ಹೊಡೆದಿದ್ದಾನೆ. ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಕೆಳಕ್ಕೆ ಬಿದ್ದ ಜಾವಿದ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಜೈನಾಬಿ ಅವರು ನೀಡಿದ ದೂರಿನ ಮೇರೆಗೆ ಆಟೋ ರಿಕ್ಷಾ ಚಾಲಕ ರಾಜು ಎಂಬಾತನ ವಿರುದ್ಧ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಠಾಣೆಯ ಆವರಣದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಮೃತ ಜಾವಿದ್ ಅವರ ಪುತ್ರ ಸೈಯದ್ ಆಶಿರ್ (26), ತನ್ನ ತಂದೆಯ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಮಾರುತಿ 800 ಕಾರಿನಲ್ಲಿ ಕತ್ತಿ ಹಿಡಿದು ಠಾಣೆಯೊಳಗೆ ನುಗ್ಗಿದ್ದಾನೆ.

ಠಾಣೆಯಲ್ಲಿದ್ದ ಆರೋಪಿಯ ಮೇಲೆ ಹಲ್ಲೆ ಮಾಡಲು ಮುಂದಾದ ಆತನನ್ನು ತಡೆದ ಹೆಡ್ ಕಾನ್ಸೆಬಲ್ ಪುಟ್ಟೇಗೌಡ ಮತ್ತು ಪಿಸಿ 393 ರವರನ್ನು ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ತಕ್ಷಣ ಎಚ್ಚೆತ್ತ ಹೋಮ್ ಗಾರ್ಡ್ ಮೂರ್ತಿ ಮತ್ತು ಇತರೆ ಸಿಬ್ಬಂದಿ ಆತನ ಕೈಯಲ್ಲಿದ್ದ 15 ಇಂಚು ಉದ್ದದ ಹರಿತವಾದ ಕತ್ತಿಯನ್ನು ಕಸಿದುಕೊಂಡು, ಆತನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಶಿರ್ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments