ಚಿಕ್ಕಮಗಳೂರು; ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯ್ತಿಯ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಬಲಿಯಾದ ಹರೀಶ್ ಹಾಗೂ ಉಮೇಶ್ರವರ ಮನೆಗೆ ಸಮಾಜಸೇವಕ ವಿಶ್ವನಾಥ ಗದ್ದೆಮನೆ ಭೇಟಿ ನೀಡಿದರು.

ಈ ವೇಳೆ ಎರಡೂ ಕುಟುಂಬದವರೊಂದಿಗೆ ಚರ್ಚಿಸಿ ಕುಟುಂಬದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಹಕರಿಸುವುದಾಗಿ ಹೇಳಿದರು. ಎರಡು ಕುಟುಂಬಗಳಿಗೂ ತಲಾ 1 ಲಕ್ಷ ರೂ.ಗಳ ಧನಸಹಾಯ ನೀಡಿ, ಅನಾರೋಗ್ಯದಿಂದ ಬಳಲುತ್ತಿರುವ ಮೃತ ಹರೀಶ್ರವರ ಕಿರಿಯ ಮಗಳ ಅನಾರೋಗ್ಯ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು.
