Saturday, August 8, 2026
Homeಜಿಲ್ಲಾಸುದ್ದಿಕಾಫಿನಾಡು ಚಿಕ್ಕಮಗಳೂರಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ

ಕಾಫಿನಾಡು ಚಿಕ್ಕಮಗಳೂರಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ

Telegram Group
Join Now

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಇನ್ನೆಷ್ಟು ಬಲಿ ಬೇಕೋ  ಗೊತ್ತಿಲ್ಲ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಬಳಿಯ ಕೆರೆಗದ್ದೆ ಎಂಬಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದಿದೆ. ಕಾಡಾನೆ ದಾಳಿಯಿಂದ ಹರೀಶ್ ಶೆಟ್ಟಿ(42) ಹಾಗೂ ಉಮೇಶ್ ಗೌಡ(43) ಸಾವನ್ನಪ್ಪಿದ್ದಾರೆ.

ಬೆಳ್ಳಂಬೆಳಗ್ಗೆ ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆ ಕೊಂದು ಹಾಕಿದೆ. ಮನೆ ಪಕ್ಕ ಸೊಪ್ಪು ತರೋದಕ್ಕೆ ಅಂತಾ ಹೋದಾಗ ಕಾಡಾನೆ ದಾಳಿ  ಮಾಡಿದ್ದಾರೆ. ಕೂಗಿ ಕೊಂಡಾಗ ಸ್ಥಳಕ್ಕೆ ಹೋದ ಮತ್ತೊಬ್ಬರ ಮೇಲೂ ಅಟ್ಯಾಕ್ ಮಾಡಿದ ಕಾಡಾನೆ ಕೊಂದು ಹಾಕಿದೆ.

ಇನ್ನು ಘಟನೆ ಬಗ್ಗೆ ಅರಣ್ಯ ಸಚಿವ ಈಶ್ವರ್ ಅವರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇ ಗೌಡ ಮಾಹಿತಿ ನೀಡಿದ್ದಾರೆ. ಹಿಡುವಳಿ ಜಾಗದಲ್ಲಿ ಈ ರೀತಿ ಘಟನೆ ನಡೆದಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ  ಅಲ್ಲಿನವರು ಬಹಳ ಹಿಂದಿನಿಂದಲೂ ಪುನರ್ವಸತಿಗೆ ಮನವಿ ಮಾಡ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments