Saturday, August 15, 2026
Homeಜಿಲ್ಲಾಸುದ್ದಿಅಜ್ಜಂಪುರ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಜುನಾಥ್ ಅಜ್ಜಂಪುರ ಸರ್ವಾನುಮತದಿಂದ ಆಯ್ಕೆ!

ಅಜ್ಜಂಪುರ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಜುನಾಥ್ ಅಜ್ಜಂಪುರ ಸರ್ವಾನುಮತದಿಂದ ಆಯ್ಕೆ!

Telegram Group
Join Now

ಅಜ್ಜಂಪುರ: 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನ.30ರ ಭಾನುವಾರ ಪಟ್ಟಣದ ಬೀರಲಿಂಗೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹೆಚ್. ಆರ್. ಚಂದ್ರಪ್ಪ ಅವರು ತಿಳಿಸಿದರು.ಈ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾಗಿ ಮಂಜುನಾಥ್ ಅಜ್ಜಂಪುರ ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು

ಅಜ್ಜಂಪುರ ಮಂಜುನಾಥ್ ಅವರು ಈ ಹಿಂದೆ ಗೀತಾ ಮಿತ್ರ ಪುಸ್ತಕ ಪ್ರಕಟಣೆ ಮಾಡುತ್ತಿದ್ದ ಗೀತಾ ಪ್ರಿಂಟರ್ಸ್ ಮಾಲೀಕ ನಾಗರಾಜ್ ಗುಪ್ತ ಅವರ ಪುತ್ರರಾಗಿದ್ದು ಇವರು ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಅಜ್ಜಂಪುರದಲ್ಲೂ ಹಾಗೂ ಬಿ ಎಸ್ಸಿ ಪದವಿ ಪಡೆದಿರುವ ಇವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಇದರ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ಕೆಲಸ ನಿರ್ವಹಿಸಿದ ಇವರಿಗೆ ೨೦೨೧ ರಲ್ಲಿ ಸಾಹಿತ್ಯ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಈವರೆಗೂ ೨೦ ಕ್ಕೂ ಹೆಚ್ಚು ಗ್ರಂಥಗಳ ಸಂಪಾದನೆ ಮತ್ತು ಕೃತಿ ರಚನೆ ಮಾಡಿದ್ದಾರೆ.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟಣೆಗೊಂಡಿವೆ. ೧,೫೦೦ಕ್ಕೂ ಹೆಚ್ಚು ಅಂಕಣ, ಲೇಖನ, ಕಥೆ, ಪ್ರಬಂಧಗಳು, ಪ್ರಕಟವಾಗಿವೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments