ಮೂಡಿಗೆರೆ: ಡ್ರಗ್ಸ್ ವಿರುದ್ಧ ಮೂಡಿಗೆರೆ ಪೊಲೀಸರ ಸಮರ ಮುಂದುವರೆದಿದ್ದು ಇದೀಗ ಮನೆ ಮುಂದೆ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುತ್ತಾರೆ
ಹೌದು .. ಮೂಡಿಗೆರೆ ತಾಲೂಕಿನ ಬಿಳುಗುಳ ಗ್ರಾಮದ ಶಿವಾಜಿನಗರದಲ್ಲಿ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳಸಾ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ, ಮುಜೇಖಾನ್, ಹಳುವಳ್ಳಿ ಹಾಗೂ ತಲಗೂರು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಶಾಲಾ-ಕಾಲೇಜಿಗೆ ಹೋಗೋ ಮಕ್ಕಳು, ಕೂಲಿ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದಲ್ಲಿರುವ ಮನೆಗಳಲ್ಲಿನ ನಾಯಿಗಳನ್ನು ರಾತ್ರಿ ಹೊತ್ತು ಬೇಟೆಯಾಡುತ್ತಿರುವುದು ಬೆಳಕಿಗೆ ಬಂದಿದ್ದ, ಇದರಿಂದ ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಅಲ್ಲದೆ ಮನೆಯಿಂದ ಹೊರ ಬರಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಅಲ್ಲದೆ ಈ ಗ್ರಾಮದಲ್ಲಿ ನಿತ್ಯ ಒಂದು ಅಥವಾ ಎರಡು ನಾಯಿಗಳನ್ನು ಚಿರತೆ ಭೇಟೆಯಾಡುತ್ತಿದ್ದು, ಇದೀಗ ಚಿರತೆ ಗ್ರಾಮದೊಳಗೆ ಪ್ರವೇಶಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚು ಮಾಡಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
