Tuesday, April 21, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಸವ ಜಯಂತಿಯಂದು ವಿಸ್ಮಯಕಾರಿ ಘಟನೆ: ದೇವಾಲಯಕ್ಕೆ ಬಂದು ತೀರ್ಥ ಪ್ರಸಾದ ಸ್ವೀಕರಿಸಿರುವ ಬಸವ

ಮೂಡಿಗೆರೆ: ಬಸವ ಜಯಂತಿಯಂದು ವಿಸ್ಮಯಕಾರಿ ಘಟನೆ: ದೇವಾಲಯಕ್ಕೆ ಬಂದು ತೀರ್ಥ ಪ್ರಸಾದ ಸ್ವೀಕರಿಸಿರುವ ಬಸವ

ಮೂಡಿಗೆರೆಯಲ್ಲಿ ಬಸವ ಜಯಂತಿಯಂದು ಅಚ್ಚರಿ, ವಿಸ್ಮಯಕಾರಿ ಹಾಗೂ ಪುಳಕಿತಗೊಳ್ಳುವ ಘಟನೆಯೊಂದು ಜರುಗಿದೆ.

ಹೌದು .. ತಾಲೂಕಿನ ಅತ್ತಿಗೆರೆಯ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ, ಗಂಟೆ ಶಬ್ಧ ಕೇಳುತ್ತಿದ್ದಂತೆ ದೇವಾಲಯಕ್ಕೆ ಬಸವ ಆಗಮಿಸಿದ್ದು ತೀರ್ಥ, ಪ್ರಸಾದ ಸ್ವೀಕರಿಸುವ ಮೂಲಕ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ದೇವಸ್ಥಾನದಲ್ಲಿ ಪೂಜೆ, ಗಂಟೆ ಶಬ್ಧ ಕೇಳುತ್ತಿದ್ದಂತೆ ದೇವಾಲಯಕ್ಕೆ ಬಸವ ಆಗಮಿಸಿದ್ದು ನಂತರ ಅರ್ಚಕರು ಬಸವನಿಗೆ ತೀರ್ಥ, ಪ್ರಸಾದ ಕೊಟ್ಟಿದ್ದಾರೆ. ಆ ನಂತರ ಪೂಜೆ ಮುಗಿಯುತ್ತಿದ್ದಂತೆ ತೀರ್ಥ ಪ್ರಸಾದ ಸ್ವೀಕರಿಸಿ ಬಸವ ವಾಪಸ್ ಹೋಗಿದ್ದಾನೆ.ಈ ಘಟ ನೆಯನ್ನ ಭಕ್ತರು ಕಣ್ಣಾರೆ ಕಂಡು ಪವಾಡದ ರೀತಿ ಆಗಿದೆ ಅಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!