ಮೂಡಿಗೆರೆ: ಕಾಫ ನಾಡು ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ ಮುಂದುವರಿದಿದೆ.ಕಳಸ ಮತ್ತು ಮೂಡಿಗೆರೆ ತಾಲೂಕಿನ ಹಲವೆಡೆ ಬಿರುಗಾಳಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಕುದುರೆಮುಖ ಸುತ್ತಾಮುತ್ತ ಭಾರೀ ಮಳೆಯಾಗಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ರಣರಣ ಬಿಸಿಲಿಗೆ ಮಲೆನಾಡ ಜನ ಫುಲ್ ಕಂಗಲಾಗಿ ಹೋಗಿದ್ರು. ಇದ್ದಕ್ಕಿದ್ದಂತೆ, ಕಾಫಿನಾಡಲ್ಲಿ ಸುರಿದ ಭಾರೀ ಬಿರು ಗಾಳಿ ಹಾಗೂ ಆಲಿ ಕಲ್ಲು ಮಳೆಗೆ ಇಳೆ ತಂಪಾಗಿದೆ. ಗಾಳಿಗೆ ಲಾಡ್ಜಿನ ಶೀಟ್ 100 ಅಡಿ ಎತ್ತರ ಹಾರಿ ಹೋಗಿದೆ. ಸ್ವಿಲ್ವರ್ ಮರಗಳು ಭಯಂಕರವಾಗಿ ವಾಲಾಡಿವೆ. ಒಂದು ಅಂಡಿ ಎತ್ತರದಷ್ಟು ನೀರು ಹರಿದಿದೆ. ಮರಗಳು ಧರಕ್ಕೆ ಉರುಳಿ ಹಲವು ಅವಾಂತರಗಳು ಆಗಿವೆ. ಈ ದೃಶ್ಯಗಳು ಮೂಡಿಗೆರೆ-ಕಳಸ ತಾಲೂಕಿನಲ್ಲಿ ಕಂಡು ಬಂದಿದ್ದು ಭಾರೀ ಗಾಳಿ, ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ
