ಹಾಸನ : ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶುಭಂ ಶುಕ್ಲಾ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಪಂಚಾಯತಿಯ ಸಿಇಓ ಆಗಿದ್ದ ಬಿ.ಆರ್. ಪೂರ್ಣಿಮಾ ವರ್ಗಾವಣೆಗೊಂಡಿದ್ದು ಅವರ ಜಾಗಕ್ಕೆ ಶುಭಂ ಶುಕ್ಲಾ ನೇಮಕಗೊಂಡಿದ್ದಾರೆ.
ಶುಭಂ ಶುಕ್ಲಾ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ರವರ ಪತಿ, ಹಾವೇರಿ ಜಿಲ್ಲೆ ಸಾವನೂರು ಉಪ ವಿಭಾಗದ ಹಿರಿಯ ಉಪ ವಿಭಾಗಾಧಿಕಾರಿಯಾಗಿದ್ದ ಶುಭಂ ಶುಕ್ಲ
2022ರ ಐಎಎಸ್ ಬ್ಯಾಚ್ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿ. ಶುಭಂ ಶುಕ್ಲಾರವನ್ನ ಮದುವೆಯಾದ ಹಿನ್ನೆಲೆಯಲ್ಲಿ, ಐಪಿಎಸ್ ಕೇಡರ್ ಬದಲಾವಣೆ ಮಾಡಿಸಿಕೊಂಡಿದ್ದ ಶುಭಾನ್ವಿತ.
