ಮಲೆನಾಡು ಭಾಗವಾದ ಕೊಪ್ಪ, ಕಳಸ ಭಾಗದಲ್ಲಿ ಅಡ್ಡಾಡುತ್ತಿದ್ದ 4 ಕಾಡುಕೋಣಗಳ ಪೈಕಿ ಒಂದು ಕಾಡುಕೋಣ ಖೆಡ್ಡಾಗೆ ಬಿದ್ದಿದೆ. ಈ ಮೂಲಕ ಅರಣ್ಯ ಇಲಾಖೆಯವ್ರ ನಡೆಸ್ತಿದ್ದ ಆಪರೇಷನ್ ಕಾಡುಕೋಣದ ಮೊದಲ ಸಕ್ಸಸ್ ಕಂಡಿದೆ. ಈ ಮೂಲಕ ಇದು ದಕ್ಷಿಣ ಭಾರತದ ಮೊದಲ ಕಾಡುಕೋಣ ಕಾರ್ಯಾಚರಣೆ ಸಕ್ಸಸ್ ಕಂಡಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ಬೀ ಸಿದ ಖೆಡ್ಡಾಗೆ ಕಾಡುಕೋಣ ಬೀಳ್ತಿದ್ದ ಸುದ್ದಿ ಕೇಳ್ತಿದ್ದಂತೆ ಶೃಂಗೇರಿ ಶಾಸಕರು ಸ್ಥಳಕ್ಕೆ ದೌಡಾಯಿಸಿದ್ರು. ನಂತರ ಅರಣ್ಯ ಇಲಾಖೆ ಅವ್ರಿಂದ ಮಾಹಿತಿ ಪಡೆದುಕೊಂಡ್ರು.ಅಷ್ಟೊತ್ತಿಗಾಗಲೇ ಸುತ್ತಮುತ್ತಲ ಗ್ರಾಮದ ಜನ ಕೂಡ ಕಾಡುಕೋಣ ನೋಡಲು ಜಮಾಯಿ ಸಿದ್ರು.
ಇದೀಗ, ಕಾಡುಕೋಣವನ್ನ ಬೇರೆಡೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.ಈ ಕಾರ್ಯಾಚರಣೆಯ ಮೂಲಕ ದಕ್ಷಿಣ ಭಾರತ ದಲ್ಲಿ ಚಿಕ್ಕಮಗಳೂರು ಜಿಲ್ಲೆ ಹೊಸ ಇತಿಹಾಸ ಬರೆದಿದೆ.
ಇದೀಗ ಮಲೆನಾಡ ಭಾಗದ ರೈತರು, ಜನರ ಮೊಗದಲ್ಲಿ ಸಂತಸ ಮೂಡಿದೆ
