ಶೃಂಗೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯು ಶನಿವಾರ ದಿನ ಶೃಂಗೇರಿ ರೈತ ಭವನದಲ್ಲಿ ಜರುಗಿತು. ಬೆಳಿಗ್ಗೆ 09 ಗಂಟೆಯಿಂದ ಸಂಜೆ 04ಗಂಟೆವರೆಗೆ ಸಂಘದ ಸದಸ್ಯರು ಮತದಾನ ಮಾಡಿದರು. ಮಧ್ಯರಾತ್ರಿವರೆಗೂ ಮತ ಎಣಿಕೆ ನಡೆಯಿತು
ಭಾರಿ ಕುತೂಹಲ ಮೂಡಿಸಿದ್ದ ಚುನಾವಣೆ ಒಟ್ಟು 14 ನಿರ್ದೇಶಕರ ಸ್ಥಾನಕ್ಕೆ 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 3ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಿದ್ದರು 9 ಜನ ಭಾಜಪ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದಾರೆ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಎರಡು ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಒಟ್ಟಾರೆಯಾಗಿ ಶೃಂಗೇರಿ ಟಿ ಎ ಪಿ ಸಿ ಎಮ್ ಎಸ್ ಭಾಜಪಾ ತೆಕ್ಕೆಗೆ ಬಿದ್ದಿದೆ.
