ಚಿಕ್ಕಮಗಳೂರು: ಐಪಿಎಲ್ ಫೈನಲ್ ಪಂದ್ಯದಲ್ಲಿ GT ವಿರುದ್ಧ RCB ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ RCB ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಹೌದು .. ನಗರದ ಆಜಾದ್ ಪಾರ್ಕ್ ಸರ್ಕಲ್ ಬಳಿ ನೂರಾರು RCB ಅಭಿಮಾನಿಗಳು ಜಮಾಯಿಸಿದ್ದು ರಸ್ತೆ ಮಧ್ಯೆ ಪಟಾಕಿ ಸಿಡಿಸಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿ RCB ಅಭಿಮಾನಿಗಳು ವಿಜಯೋತ್ಸವವನ್ನು ಆಚರಿಸಿದರು. ನೆಚ್ಚಿನ ಆಟಗಾರ ವಿಟಾಟ್ ಕೊಹ್ಲಿ ಪರ ಘೋಷಣೆ ಕೂಗಿದ ಅಭಿಮಾನಿಗಳ ಅಬ್ಬರ ಜೋರಾಗಿತ್ತು.
ಇನ್ನೂ ನೂರಾರು ಸಂಖೆಯಲ್ಲಿ ಅಭಿಮಾನಿಗಳು ಮುಳುಗಿ ವಿಜಯೋತ್ಸವವನ್ನು ಆಚರಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
