ಬೆಂಗಳೂರು: ಡ್ಯಾಂಗಳು ಬತ್ತಿ ಹೋಗುತ್ತಿವೆ, ಕೆರೆಗಳಲ್ಲಿ ನೀರು ಕಾಣಿಸ್ತಿಲ್ಲ,ಬೆಳೆಗಳು ಒಣಗುತ್ತಿವೆ,ಅನ್ನದಾತ ಆಕಾಶ ನೋ ಡುತ್ತ ಮಳೆಗಾಗಿ ಕಾಯುತ್ತಿದ್ದಾನೆ.ಈಗಾಗಲೇ ಕಳೆದ ಒಂದು ತಿಂಗಳಿಂದ ಮುಂಗಾರು ಕಣ್ಣಾಮುಚ್ಚಾಲೆ ಆಟ ಆಡಿ ಕೈ ಕೊಟ್ಟಿದೆ.ಇದ್ರಿಂದ,ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಪರಿಸ್ಥಿತಿ ಅವಲೋಕಿಸುವಂತೆ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನೂ, ಈ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಅವ್ರು ಕೊಟ್ಟಿರುವ ಮಳೆ ಎಚ್ಚರಿಕೆ ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ಎಸ್,ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಡ್ಯಾಂಗಳಿಗೆ ನೀರಿನ ಒಳ ಹರಿವು ಬರು ತ್ತಿಲ್ಲ.ಹಾಗಾಗಿ ಡ್ಯಾಂಗಳ ನೀರು ನಂಬಿ ಬೆಳೆ ಹಾಕಬೇಡಿ ಅಂದಿದ್ದಾರೆ.ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವ್ರು ದೇಶದಲ್ಲಿ ಬರಗಾಲದ ಸೂಚನೆಯನ್ನ ನಮಗೆ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಕೂಡ ಬರಗಾಲದ ಅಲ ರ್ಟ್ ಮಾಡಿದೆಯಂತೆ.ಈಗಾಗಲೇ ಕುಡಿಯೋ ನೀರಿಗೆ ಆಹಾಕಾರ ಶುರು ಆಗಿದೆ.ಮಳೆಗಾಗಿ ಅಲ್ಲಲ್ಲಿ ಪೂಜೆ ಗಳು ನಡೆಯುತ್ತಿವೆ.ಒಟ್ನಲ್ಲಿ ಈ ತಿಂಗಳಾದ್ರೂ ವರುಣ ದೇವ ದೆಯೆ ತೋರಬೇಕಿದೆ.ಇಲ್ಲದಿದ್ರೆ, ನಾನಾ ಸಂಕ ಷ್ಟಗಳು ಎದುರಾಗೋದಂತು ಸತ್ಯ…
