Saturday, August 8, 2026
Homeಇತರೆಮಲ್ಪೆ‌ ಬೀಚ್ ನಲ್ಲಿ ಕೊಚ್ಚಿ ಹೋದ ಮಂಡ್ಯ ಮೂಲದ ಯುವಕ..!

ಮಲ್ಪೆ‌ ಬೀಚ್ ನಲ್ಲಿ ಕೊಚ್ಚಿ ಹೋದ ಮಂಡ್ಯ ಮೂಲದ ಯುವಕ..!

Telegram Group
Join Now

ಉಡುಪಿ; ಬೀಚ್ ನಲ್ಲಿ ಆಡುತ್ತಿದ್ದಾಗ ಅಲೆಯ ರಭಸಕ್ಕೆ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಉಡುಪಿ ಜಿಲ್ಲೆಯ ಮಲ್ಪೆ‌ ಬೀಚ್ ನಲ್ಲಿ ಯುವಕ ಮುಳುಗಿರುವ ಘಟನೆ ಸಂಭವಿಸಿದೆ.

ಮಂಡ್ಯ ಮೂಲದ ನಾಗೇಂದ್ರ ಪ್ರಸಾದ್‌ ಎಂಬುವನು ಸ್ನೇತರೊಂದಿಗೆ ಮಲ್ಪೆ ಬೀಚ್‌ ಗೆ ಬಂದಿದ್ದನು. ಒಟ್ಟು ಐವರು ಸ್ನೇಹಿತರು ನೀರಿನಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ನಾಗೇಂದ್ರ ಸಿಲುಕಿ ಈಜು ಬಾರದೇ ಕೊಚ್ಚಿ ಹೋಗಿದ್ದಾನೆ.

ಘಟನೆ ತಿಳಿದ ಕೂಡಲೇ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಬೀಚ್‌ ಗಿಳಿದು ಯುವಕನನ್ನು ಕಾಪಾಡಲು ಮುಂದಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ನಾಗೇಂದ್ರನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳಿದ್ದಾನೆ.

ನಾಗೇಂದ್ರ ಹಾಗೂ ಸ್ನೇಹಿತರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ರಜೆ ವೇಳೆ ಐವರು ಒಟ್ಟಾಗಿ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನದ ಹೊತ್ತಿಗೆ ನೀರಿಗಿಳಿದು ಆಟವಾಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆನ್ನಲಾಗಿದೆ.ಸದ್ಯ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments