ಹಾಸನ: ಕಾರಿನಲ್ಲಿ ಅಟ್ಟಾಡಿಸಿಕೊಂಡು ಬಂದು ಲಾರಿ ಚಾಲಕನ ಕೊಲೆ ಮಾಡಲು ಯತ್ನಿಸಿದ ಘಟನೆ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆದಿದ್ದು ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಹೌದು.. ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ಕಾರು ಚಾಲಕ ಲಾರಿಯ ಗ್ಲಾಸ್ ಒಡೆದು, ಕೊಲ್ಲಲು ಯತ್ನ ನಡೆಸಿದ್ದು ಈ ವೇಳೆ ಚಾಲಕ ತಪ್ಪಿಸಿಕೊಂಡಿದ್ದ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ನೋಡಿದ್ರೆ ಒಮ್ಮೆಲೆ ಎಲ್ಲರನ್ನ ಬೆಚ್ಚಿಬೀಳಿಸುತ್ತೆ.
ಹಾಗೆ ದುಷ್ಕರ್ಮಿಗಳ ಗ್ಯಾಂಗ್ನಿಂದ ತಪ್ಪಿಸಿಕೊಂಡು ಬಂದು ಲಾರಿ ಚಾಲಕ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿ ತನಗಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ
ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ ಲಾರಿ ಚಾಲಕ ಡಸ್ಟರ್ ಕಾರು ಹಾಗೂ ಆರೋಪಿ ಧೀರಜ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.