ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಾಗಿ ಜೀವರಾಜ್ ಗೆಲುವು ಸಾಧಿಸಿ ಶಾಸಕರಾಗಲಿ ಎಂದು ಜೀವರಾಜ್ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು. ಅಲಗೇಶ್ವರ ಶ್ರೀ ಮುತ್ತುಮಾರಿ ದೇವಸ್ಥಾನದಲ್ಲಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ತೀವ್ರ ಕೂತೂಹಲ ಮೂಡಿಸಿರುವ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಮೇ 2 ರಂದು ನಡೆಯಲಿದ್ದು ಬಿಜೆಪಿ ಕಾರ್ಯಕರ್ತರು ಹಾಗೂ ಜೀವರಾಜ್ ಅಭಿಮಾನಿಗಳು ದೇವರಿಗೆ ಪೂಜೆ ಮಾಡಿ ಜೀವರಾಜ್ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜಯಪುರ ಸಮೀಪದ ಅಲಗೇಶ್ವರ ಗ್ರಾಮದಲ್ಲಿ ಇರುವ ಮುತ್ತುಮಾರಿಯಮ್ಮ ದೇವರಿಗೆ ಜೀವರಾಜ್ ಗೆಲುವಿಗಾಗಿ ವಿಶೇಷ ಪೂಜೆ ಮಾಡಲಾಯಿತು
