Saturday, September 19, 2026
Homeಕ್ರೈಮ್ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ: ಇಬ್ಬರು ಯುವಕರ ಮೇಲೆ ಮನಸ್ಸೋ‌ ಇಚ್ಛೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ: ಇಬ್ಬರು ಯುವಕರ ಮೇಲೆ ಮನಸ್ಸೋ‌ ಇಚ್ಛೆ ಹಲ್ಲೆ

Telegram Group
Join Now

ಮೂಡಿಗೆರೆ : ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿದ್ದು  ಇಬ್ಬರು ಯುವಕರ ಮೇಲೆ ಮನಸ್ಸೋ‌ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಎಂ.ಇ.ಎಸ್. ಶಾಲೆ ಆಟದ ಮೈದಾನದಲ್ಲಿ ನಡೆದಿದೆ.

ಹೌದು .. ಗಣಪತಿ ಕಾರ್ಯಕ್ರಮಕ್ಕೆ ಬಂದಿದ್ದ ಕುನ್ನಳ್ಳಿ ಮೂಲದ ಹೃತಿಕ್, ವಿನಮ್ರತ್ ಮೇಲೆ ಹಲ್ಲೆ ನಡೆಸಿದ್ದು  ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಗಂಭೀರ ಗಾಯಗೊಂಡ ಇಬ್ಬರು ಯುವಕರನ್ನು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಿಜೆಪಿ ಮುಖಂಡ ಉತ್ತಮ್ ಎಂಬುವರು ಯುವಕರ ಮೇಲೆ ಹಲ್ಲೆ ನಡೆಸಿದ್ದು ಆದರೆ ಹಲ್ಲೆಗೆ ನೈಜ ಕಾರಣ ಏನೆಂದು ತಿಳಿದು ಬಂದಿಲ್ಲ  ನಂತರ ಸ್ಥಳೀಯರು ಬಂದು ಬಿಡಿಸಿದ್ದಾರೆ.

ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!