Saturday, September 19, 2026
Homeಜಿಲ್ಲಾಸುದ್ದಿಭಾರತದ ಗಲ್ಲಿಗಳಲ್ಲಿ ನಿರ್ಬಂಧಗಳಿಲ್ಲದೆ ಧಾರ್ಮಿಕ ಕಾರ್ಯ ನಡೆದರೆ ನಮಗೆ ಧಕ್ಕಿದ ನೈಜ ಸ್ವತಂತ್ರ : ಶ್ರೀ...

ಭಾರತದ ಗಲ್ಲಿಗಳಲ್ಲಿ ನಿರ್ಬಂಧಗಳಿಲ್ಲದೆ ಧಾರ್ಮಿಕ ಕಾರ್ಯ ನಡೆದರೆ ನಮಗೆ ಧಕ್ಕಿದ ನೈಜ ಸ್ವತಂತ್ರ : ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿ

Telegram Group
Join Now

ಮೂಡಿಗೆರೆ :ದೇಶದ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲೂ ಧಾರ್ಮಿಕ ಕಾರ್ಯಗಳು ನಿರ್ಬಂಧ ಇಲ್ಲದೆ ಆಚರಿಸದರೆ ಅಂದು ನಮಗೆ ನಿಜವಾದ ಸ್ವತಂತ್ರ ಸಿಕ್ಕಿದಂಗೆ ಎಂದು ಶ್ರೀ ತೊಂಟದಾರ್ಯ ಮಠದ ಶ್ರೀ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿ ಹೇಳಿದರು ಅವರು

ಅವರು ಶುಕ್ರವಾರ ಅಡ್ಯಾತಾಯ ರಂಗಮಂದಿರದಲ್ಲಿ ಸಾರ್ವಜನಿಕ ಶ್ರೀ ಹಿಂದ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 108 ತೆಂಗಿನಕಾಯಿ ಗಣ ಹೋಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿಗೆ ಶಾಂತಿಯನ್ನು ಸಂಸ್ಕಾರವನ್ನು ಸಂಸ್ಕುತಿಯನ್ನು ಕಲಿಸಿಕೊಟ್ಟ ಧರ್ಮ ನಮ್ಮ ಹಿಂದೂ ಧರ್ಮ ಮುಸ್ಲಿಂ ಸಮಾಜದ ಹಬ್ಬ ಕ್ರೈಸ್ತ ಸಮಾಜದ ಹಬ್ಬಗಳಲ್ಲಿ ದೇಶದ ಯಾವುದೇ ಒಂದು ಭಾಗದಲ್ಲಿ ಹಿಂದೂ ಧರ್ಮದವರು ಕಲ್ಲು ಬಿಸಾಡಿರುವ ಒಂದು ಘಟನೆ ಇಲ್ಲ ನಮ್ಮ ಗಣಪತಿ ಮೆರವಣಿಗೆಯಲ್ಲಿ ಮಸೀದಿಯಿಂದ ಕಲ್ಲು ಚಪ್ಪಲಿ ಬರುತ್ತೆ ಯಾಕೆ ಸ್ವತಂತ್ರ ಪೂರ್ವದಲ್ಲಿ ನಮ್ಮ ಧರ್ಮದ ಮೇಲೆ ನಿರಂತರವಾಗಿ ಬೇರೆ ಧರ್ಮಿಯಾರಿಂದ ದಾಳಿ ಆದರೂ ಸಹಿಸಿಕೊಂಡಿದ್ದೇವೆ ಆದರೆ ಈಗ ನಮ್ಮವರಿಂದಲೇ ಕಾನೂನು ಎಂದು ಧಾರ್ಮಿಕ ನಮ್ಮ ಭಾವನೆಗೆ ದಕ್ಕೆ ತರುತಿದ್ದಾರೆ ನಮ್ಮದೇ ನೆಲದಲ್ಲಿ ಆ ರಸ್ತೆಯಲ್ಲಿ ಈ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದು ತಾಕಿತ್ತು ಮಾಡುತ್ತಾರೆ ರಾಜಕೀಯ ಬಂದು ಕೇವಲ 80 ವರ್ಷ ಆಗಿರುವುದು ಹಿಂದೂ ಧರ್ಮದ ಹಬ್ಬಗಳು ಆಚರಣೆಗಳು ಅನಾಧಿಕಾಲದಿಂದಲೂ ಇರುವಂತದ್ದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ ರಾಜಕೀಯ ನಾಯಕರು ಯಾವುದೇ ಪಕ್ಷದಲ್ಲಿ ಇರಲಿ ಧರ್ಮವಾಗಿ ಅಧಿಕಾರ ನಡೆಸಿ ಇಲ್ಲವಾದಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ಕೊಡುತ್ತೆ ಎಂದು ಅವರು ಹೇಳಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ ಈ ಹಿಂದೆ ಗಣಪತಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ದೊಡ್ಡ ಅಪರಾಧ ಅನ್ನುವಂತೆ ನಮ್ಮ ಪಕ್ಷದವರು ಚರ್ಚೆ ಮಾಡಿದ್ರು ಸಚಿವ ಸ್ಥಾನ ತಪ್ಪಲು ಅದೇ ಕಾರಣ ಎಂದು ದೊಡ್ಡ ದೊಡ್ಡವರೆಲ್ಲ ಮಾತಾಡಿದರು ನಾನು ಮೊದಲು ಹಿಂದೂ ನಂತರ ರಾಜಕಾರಣಿ ನನ್ನ ಆಚರಣೆ ಬಗ್ಗೆ ನನಗೆ ಗೊತ್ತಿದೆ ಅದನ್ನು ಯಾರಿಗೂ ತಿಳಿಸುವ ಅಗತ್ಯ ಇಲ್ಲ ಅದು ನಾನು ಬಾಲ್ಯದಿಂದಲೂ ಪೂಜಿಸಿ ಕೊಂಡು ಬರುತ್ತಿರುವ ಗಣೇಶೋತ್ಸವ ಇದಕ್ಕೆ ಹೋಗೋದು ತಪ್ಪು ಅನ್ನುವಂತದ್ದು ನಾನು ಒಪ್ಪಿಕೊಳೋಕೆ ಸಾಧ್ಯವಿಲ್ಲ ನನ್ನ ರಾಜಕೀಯ ಕಾಂಗ್ರೆಸ್ ಪಕ್ಷದಲ್ಲಿಯೇ ಹೊರತು ಬೇರೆ ಪಕ್ಷದಲ್ಲಿ ಅಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನಲ್ಲಿ ವಿವಿಧ ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಚಕರನ್ನು ಸನ್ಮಾನಿಸಿ ಗೌರವಿಸಲಾಯಿತು,

ಈ ವೇಳೆ ಮಾಜಿ ಉಪ ಸಬಾಪತಿ ಎಂ ಕೆ ಪ್ರಾಣೇಶ್, ಸಮಿತಿ ಅಧ್ಯಕ್ಷ ಅನುಕುಮಾರ್ ಜೆ ಎಸ್ ರಘು, ವಿನಯ್ ಹಳೇಕೋಟೆ ಹೆಚ್ ಪಿ ಮಂಜುನಾಥ್ , ಪ್ರವೀಣ್ ಮಗ್ಗಲಮಕ್ಕಿಸಂತೋಷ್ ಮೇಕನಗದ್ದೆ, ವಿನೋದ್ ಕಣಚೂರು, ಸಂಜಯ್ ಕೊಟ್ಟಿಗೆಹಾರ ಸೇರಿದಂತೆ ಇತರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!