ಚಿಕ್ಕಮಗಳೂರು: ಕಡೂರಿನ ಮೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ತಿರುಪತಿ ನಾಯ್ಕ್ ಲೋಕೇಶ್ ಎಂಬುವರಿಂದ 5,000 ರೂ ಲಂಚ ಪಡೆಯುವಾಗ ಲೋಕಾಯುಕ್ತಾದವರು ದಾಳಿ ನಡೆಸಿ ಬಂಧಿಸಿದ್ದಾರೆ.
ಲೋಕೇಶ್ ಶಿರಾ ಮೂಲದವರಾಗಿದ್ದು ಕಡೂರಿನ ತಂಗಲಿ ಬಳಿ ಲೇಔಟ್ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಟಿ.ಸಿ.ಅಳವಡಿಸಲು ತಿರುಪತಿ ನಾಯ್ಕ್ 10,000ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಐದು ಸಾವಿರ ಲೋಕೇಶ್ ನಿಂದ ಪಡೆಯುವಾಗ ಲೋಕಾಯುಕ್ತಾ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ .ಬಿ.ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿದ್ದಾರೆ.
