ಚಿಕ್ಕಮಗಳೂರು: ಜಮೀರ್ ಅಹಮದ್ ಖಾನ್ಗೆ ಮಿನಿಸ್ಟರ್ ಪಟ್ಟ ಕೊಡಬೇಕು ಅಂತ ಆಗ್ರಹಿಸಿ ಚಿಕ್ಕಮಗಳೂರಿನ ಜಾಮೀಯ ಮಸೀದಿ ಬಳಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಒಂದೊಮ್ಮೆ ಕಾಂಗ್ರೆಸ್ ಪಕ್ಷ ಜಮೀರ್ ಅವರಿಗೆ ಮಂತ್ರಿಗಿರಿ ಕೊಡದಿದ್ರೆ ಸರಿ ಆದ ಪಾಠ ಕಲಿಸ್ತೀವಿ ಅಂದಿದ್ದಾರೆ ಮುಸ್ಲಿಮರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶೇಕಡ 88ರಷ್ಟು ಮತಗಳು ಕಾಂಗ್ರೆಸ್ಗೆ ಬಿದ್ದಿ ವೆ.ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರತಿ ಕ್ಷೇತ್ರಕ್ಕೂ ಜಮೀರ್ ಹೋಗಿ ಮುಸ್ಲಿಮರ ವೋಟ್ ಹಾಕಿಸಿದ್ದಾರೆ. ಆದ್ರೆ ಇದೀಗ ಮಿನಿಸ್ಟರ್ ಪಟ್ಟ ಕೊಡದೇ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ.
ಒಂದೊಮ್ಮೆ ಜಮೀರ್ಗೆ ಕಾಂಗ್ರೆಸ್ ಪಕ್ಷ ಮಂತ್ರಿಗಿರಿ ಕೊಡದಿದ್ರೆ, 2028ರಲ್ಲಿ ಮತ್ತದೇ ಪ್ರವಾಸ ಮಾಡಿ ಕಾಂಗ್ರೆಸ್ಗೆ ಮತ ಹಾಕದಂತೆ ಮಾಡ್ತೀವಿ ಅಂದಿದ್ದಾರೆ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಮಾಡಿರೋ ಅಪರಾಧವನ್ನ ಸರಿಪಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
