ಸಕಲೇಶಪುರ: ಹೃದಯಾಘಾತದಿಂದ ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಾಳ್ಳುಪೇಟೆ ಬೈಪಾಸ್ ನಲ್ಲಿರುವ ಟೀ ಕ್ಯಾಟೀನ್ ಬಳಿ ನಡೆದಿದೆ.
ಕ್ಯಾಟೀನ್ ನಲ್ಲಿ ಬಿಸಿನೀರು ಕೇಳಿದ್ದ ಚಾಲಕ ಬಿಸಿನೀರು ತರುವುದರದೊಳಗೆ ಕುಸಿದು ಬಿದ್ದ ಚಾಲಕ ಅಮರ್ ಸಿಂಗ್ (55) ಸಾವನ್ನಪ್ಪಿದ್ದಾರೆ.
ಕ್ಯಾಟೀನ್ ನಲ್ಲಿ ಟೀ ಕುಡಿದು ಕುಳಿತಿದ್ದ ಉತ್ತರಪ್ರದೇಶ ಮೂಲದ ಲಾರಿ ಚಾಲಕನಿಗೆ ಧಿಡೀರ್ ಕಾಣಿಸಿಕೊಂಡ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕರಿಗೆ ವಾಹನ ಚಲಾಯಿಸುವಾಗ ಉಂಟಾಗುವ ತೀವ್ರ ಮಾನಸಿಕ ಒತ್ತಡ, ದೀರ್ಘಾವಧಿಯ ಪ್ರಯಾಣ, ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
