Tuesday, August 11, 2026
Homeಜಿಲ್ಲಾಸುದ್ದಿಕೊಪ್ಪ: ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ!

ಕೊಪ್ಪ: ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ!

Telegram Group
Join Now

ಕೊಪ್ಪ: ಸ್ವಾತಂತ್ರ್ಯಾ ನಂತರ ರಾಷ್ಟ್ರೀಯತೆಯ ಪುನರುತ್ಥಾನಕ್ಕಾಗಿ ಸ್ಥಾಪಿಸಲ್ಪಟ್ಟ ಭಾರತೀಯ ಜನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿ ಜನ ಸಂಘದ ಅಧ್ಯಕ್ಷರವರೆಗೆ ವಿವಿಧ ಸ್ತರಗಳಲ್ಲಿ ಸೇವೆಗೈದವರು.

ಸಂಘಟನೆಯ ಸೈದ್ಧಾಂತಿಕ ತಳಹದಿ ಹಾಗೂ ನೀತಿ ನಿರೂಪಣೆಗಳ ಚೌಕಟ್ಟುಗಳನ್ನು ಅಣಿಗೊಳಿಸಿರುವುದರಲ್ಲಿ ದೀನ್ ದಯಾಳರ ಪಾತ್ರ ಬಹು ದೊಡ್ಡದು.

ಅಂತ್ಯೋದಯದ ಕಲ್ಪನೆ, ಸರ್ವ ಕಾಲಕ್ಕೂ ಸರಿ ಎನಿಸುವ ಏಕಾತ್ಮ ಮಾನವ ದರ್ಶನ ಎಂಬ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಆಧ್ಯಾತ್ಮಿಕ ಸೂತ್ರವನ್ನು ಸಮಾಜಕ್ಕೆ ನೀಡಿ ಹೋದ ಮಹಾನ್ ದಾರ್ಶನಿಕ ಧೀನ್ ದಯಾಳ್ ಉಪಾಧ್ಯಾಯ ಅವರನ್ನು ಕೊಪ್ಪ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಗೌರವ ಪೂರ್ವಕವಾಗಿ ಸ್ಮರಿಸಿಕೊಳ್ಳಲಾಯಿತು.

ಮಂಡಲ ಅಧ್ಯಕ್ಷ ಶ್ರೀ ದಿನೇಶ್ ಹೊಸೂರು.. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಪುಣ್ಯಪಾಲ್ ಹಾಗೂ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments