ಸಕಲೇಶಪುರ: ವಿಶ್ವದ ನಂಬಿಕಸ್ಥ ಜನನಾಯಕ, ಅಗ್ರಸ್ಥಾನದಲ್ಲಿ ಪ್ರಧಾನಿ ಮೋದಿ ಎಂದು ಮಾಳವಿಕ ಅವಿನಾಶ್ ತಿಳಿಸಿದರು.
ಅವರು, ಸಕಲೇಶಪುರದ ಅದ್ವಯ ರೆಸಾರ್ಟ್ ನಲ್ಲಿ ನಡೆದ ಪಂಡಿತ್ ದೀನದಯಾಳ ಉಪಾಧ್ಯಯ ಪ್ರಶಿಕ್ಷಣ ಮಹಾಭಿಯಾನ 2026 ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಮಾತನಾಡಿ ದೇಶಕ್ಕೆ ಮೋದಿ ಸರ್ಕಾರದಿಂದ ಹಲವಾರು ಜನಕಲ್ಯಾಣ ಯೋಜನೆಗಳು ಜಾರಿ ಮಾಡಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ, ಉನ್ನತ ಶಿಕ್ಷಣಕ್ಕೆ ಒತ್ತು, ರಸ್ತೆ ನಿರ್ಮಾಣ,ಜನೌಷಧಿ ಕೇಂದ್ರಗಳು ಹಾಗೂ ಕೊರೊನಾ ಲಸಿಕೆ,ಡಿಜಿಟಲ್ ಇಂಡಿಯಾ,ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು,ಬಾಲಾಕೋಟ್ ಸರ್ಜಿಕಲ್ ದಾಳಿ,ಜಲ್ ಜೀವನ್ ಮಿಷನ್ ಸೇರಿದಂತೆ ಹತ್ತಾರು ಯೋಜನೆ ಜಾರಿ ಮಾಡಿ ದೇಶದ ಹಿತ ಕಾಪಾಡುವಲ್ಲಿ ಎತ್ತಿದ ಕೈ ಎಂದು ತಿಳಿಸಿದ್ದಾರೆ.
ಈ ವೇಳೆ ಶಾಸಕ ಸಿಮೆಂಟ್ ಮಂಜು, ಎಚ್. ಕೆ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಭಾಗಿಯಾಗಿದ್ದರು.
