ಕಳಸ: ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂಬಿಡದೇ ಧಾರಾಕಾರ ಮಳೆ ಬರುತ್ತಿದ್ದು ಆದರೆ ಗುರುವಾರ ಸುರಿದ ಭಾರೀ ಮಳೆಗೆ ಚರಂಡಿ ತುಂಬಿ ಬಸ್ ನಿಲ್ದಾಣಕ್ಕೆ ನೀರು ನುಗ್ಗಿದೆ.
ಬುಧವಾರದಿಂದ ಕಾಫಿನಾಡಲ್ಲಿ ಮತ್ತೆ ಮಳೆ ಚುರುಕು ಪಡೆದಿದೆ. ಚರಂಡಿ ತುಂಬಿ ರಸ್ತೆಗೆ ನೀರು ಹರಿದಿದೆ. ಮಳೆ ಕಂಡು ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.
ಜುಲೈ ಕೊನೆ ಬಂದರೂ ಕೊಡಿ ಬೀಳಬೇಕಾದ ಮಲೆನಾಡ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಆಗಸ್ಟ್ ಬಂದರೂ ಮಳೆಗಾಗಿ ಸಮೃದ್ಧ ಮಳೆಗಾಗಿ ಆಕಾಶದ ಕಡೆ ರೈತರು ಮುಖ ಮಾಡಿದ್ದಾರೆ.
