Tuesday, August 11, 2026
Homeಜಿಲ್ಲಾಸುದ್ದಿಹಿರಿಯ ರಾಜಕಾರಣಿ, ಮಲೆನಾಡಿನ ಮುತ್ಸದ್ಧಿ ಮಡಬೂರು H.T.ರಾಜೇಂದ್ರ ವಿಧಿವಶ!

ಹಿರಿಯ ರಾಜಕಾರಣಿ, ಮಲೆನಾಡಿನ ಮುತ್ಸದ್ಧಿ ಮಡಬೂರು H.T.ರಾಜೇಂದ್ರ ವಿಧಿವಶ!

Telegram Group
Join Now

ಕೊಪ್ಪ: ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಹೆಚ್.ಟಿ. ರಾಜೇಂದ್ರ ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧರಾಗಿದ್ದಾರೆ.ʼ

ಇವರು ಜೆಡಿಎಸ್‌ ಪಕ್ಷದ ಹಿರಿಯ ನಾಯಕರಾಗಿದ್ದು , ಪಕ್ಷದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಿಂದೆ ಜೆಡಿಎಸ್‌ ಪಕ್ಷದಿಂದ ಶೃಂಗೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರು. ಇವರು ಅಪಾರ ಸ್ನೇಹ ಬಳಗವನ್ನು ಹೊಂದಿದ್ದು ನಡೆದಾಡುವ ಗ್ರಂಥಾಲಯ, ಅಪಾರ ಜ್ಞಾನ ಹಾಗೂ ಅನುಭವ ಹೊಂದಿದ್ದ ಹಾಗೂ ಮಲೆನಾಡಿನ ಮುತ್ಸದ್ಧಿ ಹಿರಿಯ ರಾಜಕಾರಣಿ ಎಂದೇ ಜನಪ್ರಿಯರಾಗಿದ್ದರು.

ಮಡಬೂರು ಎಚ್ ಟಿ ರಾಜೇಂದ್ರ ಅವರು ನಮ್ಮನ್ನ ಅಗಲಿದ್ದು. ಸಾರ್ವಜನಿಕರಿಗೆ ಬೆಳಿಗ್ಗೆ 11.30 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಅವರ ಸ್ವಗೃಹ ಮಡಬೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ನಂತರ ನರಸಿಂಹರಾಜಪುರದಲ್ಲಿರುವ ಒಕ್ಕಲಿಗ ಸಂಘದ ಶ್ರೀ ಶಾರದಾ ವಿದ್ಯಾ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು 11 :30 ಗಂಟೆಯಿಂದ ಮದ್ಯಹ್ನ 3:30 ಗಂಟೆವರೆಗೆ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಅವಕಾಶ ನಂತರ ಸಂಜೆ 5 ಗಂಟೆಗೆ ಮಡಬೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments