ಶೃಂಗೇರಿ: ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಹಾಗೂ ಉಮೇಶ್ ರವರ ಮನೆಗೆ ಹರಿಹರಪುರ ಮಠದ ಸ್ವಾಮೀಜಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ .
ಈ ವೇಳೆ ಸ್ವಾಮೀಜಿ ಎದುರು ಅಳಲು ತೋಡಿಕೊಂಡ ಪತ್ನಿ ಆಶಾ ಆಗ ಸಂತೈಸಿದ ಸ್ವಾಮೀಜಿ ಈ ಕುಟುಂಬಗಳ ಜೊತೆ ನಿಲ್ಲೋದಾಗಿ ತಿಳಿಸಿದರು. ಶ್ರಾವ್ಯಳ ಅನಾರೋಗ್ಯ ಸಮಸ್ಯೆಗೆ ಸಹಕಾರ ನೀಡಿ ಹಾಗೂ ಶ್ರಾವ್ಯಾಳ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ಶ್ರೀಮಠದ ಕಡೆಯಿಂದ ನೋಡಿಕೊಳ್ಳುವ ಭರವಸೆ ಕೂಡ ಕುಟುಂಬಸ್ಥರಿಗೆ ನೀಡಿದರು.
ಆ ನಂತರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಮಠದಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು. ಸಚಿದಾನಂದ ಸರಸ್ವತಿ ಸ್ವಾಮೀಜಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ವಿಠಲ್ ಶೃಂಗೇರಿ
7676798969
