ಶೃಂಗೇರಿ: ತಾಲೂಕಿನಾದ್ಯಂತ ಧಾರಾಕಾರವಾಗಿ ಮತ್ತೆ ಮಳೆಯಾಗಿ ಹಲವು ಅನಾಹುತಗಳು ಸಂಭವಿಸಿವೆ. ಪಟ್ಟಣದ ವಿದ್ಯಾರಣ್ಯಪುರದಲ್ಲಿ ಬಳಿ ಚರಂಡಿ ನೀರು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಠಿಮಾಡಿದೆ.
ಹೌದು .. ವಿದ್ಯಾರಣ್ಯಪುರದ ಕೇರೋಡಿ ಗಣೇಶ್ ಮೂರ್ತಿ ಅವರ ಮನೆಗೆ ಈ ಹಿಂದೆಯೂ ಕೂಡ ಒಮ್ಮೆ ನೀರು ನುಗ್ಗಿ ಮನೆಯ ಗೋಡೆ ಕುಸಿದಿತ್ತು. ಆದರೆ, ಇದುವರೆಗೂ ಕೂಡ ಸಂಬಂಧಪಟ್ಟವರು ಯಾವುದೇ ಶಾಶ್ವತ ಪರಿಹಾರಗಳು ನೀಡಿಲ್ಲ ಎಂದು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಶತ್ವತ ಪರಿಹಾರವನ್ನು ಕೂಡಲೇ ಒದಗಿಸಿಕೊಡಬೇಕಾಗಿದೆ.
ಹಾಗೆ ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಪ್ರವಾಹ ಉಂಟಾಗಿ, ಮುಖ್ಯರಸ್ತೆಯಲ್ಲಿ ಒಂದು ಅಡಿ ನೀರು ಹರಿಯಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
