ಮೂಡಿಗೆರೆ: ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಬಣಕಲ್ ಹೋಬಳಿ ಅಧ್ಯಕ್ಷರಾಗಿ ಟಿ.ಎಂ.ಸುಬ್ರಮಣ್ಯ ಅವರು ಮುಂದುವರೆದಿದ್ದಾರೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಜಿ.ಸುರೇಂದ್ರ ಕುಂದೂರು ಪಕ್ಷದ ಆಂತರಿಕ ಹಿತದೃಷ್ಟಿಯಿಂದ 201 ನೇ ಸಾಲಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇತೃತ್ವದಲ್ಲಿ ಹೋಬಳಿ ಅಧ್ಯಕ್ಷರ ಹುದ್ದೆಯನ್ನು ಸೃಷ್ಟಿಸಿ ಬಣಕಲ್ ಹೋಬಳಿ ಅಧ್ಯಕ್ಷರನ್ನಾಗಿ ಟಿ.ಎಂ. ಸುಬ್ರಮಣ್ಯ ತ್ರಿಪುರ ಇವರನ್ನು ಸೂಚಿಸಲಾಗಿದೆ.
ಪ್ರಸ್ತುತ ಎಸ್.ಐ.ಆರ್.ಪ್ರಕ್ರಿಯೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವುದರಿಂದ ಜೊತೆಗೆ ಶೀಘ್ರದಲ್ಲಿ ಗ್ರಾಮ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸನಿಹದಲ್ಲಿದ್ದು ಪಕ್ಷ ಚಟುವಟಿಕೆ ಸದಾ ಕ್ರಿಯಾಶೀಲವಾಗಿರುವ ಶ್ರೀ ಸುಬ್ರಮಣ್ಯ ಅವರನ್ನು ಪ್ರಸ್ತುತ ಜವಾಬ್ದಾರಿಯಲ್ಲಿ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ
