ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧದ ಹಿನ್ನೆಲೆ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಅಜ್ಜಿ ಚೆನ್ನಮ್ಮಜ್ಜಿ ವಿಧಿವಶರಾದ ಸುದ್ದಿ ಕೇಳಿ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ.ಅಜ್ಜಿಯ ಅಂತಿಮ ದರ್ಶನಕ್ಕೆ ಪ್ರಜ್ವಲ್ ರೇವಣ್ಣ ಬರುತ್ತಾರಾ..? ಅಜ್ಜಿಯ ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಭಾಗವಹಿಸ್ತಾರ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆರೋಲ್ಗಾಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಅಜ್ಜಿಯ ಅಂತಿಮ ದರ್ಶನದಲ್ಲಿ ಹಾಗೂ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಪ್ರಜ್ವಲ್ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಪೆರೋಲ್ಗಾಗಿ ಮನವಿ ಮಾಡಿದ್ದಾರೆ.
ಅಜ್ಜಿ ಚೆನ್ನಮ್ಮ ವಿಧಿವಶ ಹಿನ್ನೆಲೆ ಪೆರೋಲ್ ನೀಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿದೆ.ಕೋರ್ಟ್ ಪೆರೋಲ್ ಅರ್ಜಿಯ ಪರಿಶೀಲನೆ ನಂತರ ಕೋರ್ಟ್ ನಿರ್ದೇಶನದ ಬಳಿಕ ಜೈಲಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ.ಒಟ್ನಲ್ಲಿ ಅಜ್ಜಿಯ ಪ್ರೀತಿಯ ಮೊಮ್ಮಗನಾಗಿದ್ದ ಪ್ರಜ್ವಲ್ ಅಜ್ಜಿಯ ಕೊನೆಗಾಲದಲ್ಲಿ ಅವರ ಜೊತೆ ಇರಲಾಗಲಿಲ್ಲ ಅನ್ನೋ ನೋವು ಅವರನ್ನ ಕಾಡ್ತಿದೆ.
