ಕಳಸ: ತೋಟದಲ್ಲಿ ಕೆಲಸಮಾಡುವಾಗ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಕಳಸ ತಾಲೂಕಿನ ಬಂಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು .. ಬಂಟನಹಳ್ಳಿ ಗ್ರಾಮದ ನಿವಾಸಿ ಜ್ಯೋತಿ ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕ್ಚಿದ್ದರಿಂದ ಜೋರಾಡಿ ಕುರುಚಿಕೊಂಡ ಮಹಿಳೆ . ಈ ವೇಳೆ ಅಕ್ಕಪಕ್ಕದವರು, ಸ್ಥಳೀಯರು ಓಡಿ ಬಂದು ಮಹಿಳೆಯನ್ನ ಕಳಸ ಆಸ್ಪತ್ರೆಗೆ ದಖಲಿಸಲಾಗಿದೆ.
ಆದರೆ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲು ತಿಳಿಸಿದ್ದಾರೆ.ಈ ವೇಳೆ ಜ್ಯೋತಿ ಅವರನ್ನ ಮಂಗಳುರಿಗೆ ಕರೆದೊಯ್ಯುವ ಮಾರ್ಗ ಮಧ್ಯ ದಾರಿಯಲ್ಲೇ ಸಾವನ್ನಪ್ಪಿದ್ದಾರೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಸಂಬಂಧಿಕರಿ ಕಳಸ ಸಮುದಾಯ ಆಸ್ಪತ್ರೆಯಲ್ಲಿ ಸರಿಯಾದ ಹೆಚ್ಚಿನ ಚಿಕಿತ್ಸೆಯ ಲಭ್ಯವಿಲ್ಲ ಈ ರೀತಿ ಆದರೆ ಮುಂದಿನ ಕಥೆ ಏನು ಹೀಗೆ ಎಷ್ಟು ರೋಗಿಗಳನ್ನು ಸಾಯಿಸಬೇಕು ಎಂದು ಆಸ್ಪತ್ರೆ ವಿರುದ್ಧ ಕೂಗಾಡಿದ್ದಾರೆ.
ಜನಪ್ರತಿನಿಧಿಗಳು ಇದನ್ನು ಗಮನಹರಿಸಿ ಸ್ಥಳೀಯ ಆಸ್ಪತ್ರೆಗಳಲ್ಲಿ ಒಳ್ಳೆಯ ಪ್ರಮಾಣದ ಟ್ರೀಟ್ ಮೆಂಟ್ ಗಳಿಗೆ ಬೇಕಾದ ಸೌಲಭ್ಯ ಒದಗಿಸಬೇಕಾಗುತ್ತದೆ.
