ಚಿಕ್ಕಮಗಳೂರು: ಮೆರವಣಿಗೆಯಲ್ಲಿ ಡಿಜೆ ಆಫ್ ಮಾಡಿಸಿದ ಪೊಲೀಸರಿ ಇದರಿಂದ ನಡುರಸ್ತೆಯಲ್ಲಿ ಗಣಪತಿಯನ್ನು ಬಿಟ್ಟ ಹೋದ ಜನರು ಇದು ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಘಟನೆ ನಡೆದಿದೆ.
ಹೌದು… ಡಿಜೆ ಹಾಕ್ಬೇಡಿ ಸುಮ್ನೆ ಮೆರವಣಿಗೆ ಮಾಡ್ಕೊಂಡ್ ಹೋಗಿ ಎಂದು ಗದರಿದ ಪೊಲೀಸರು ಹಾಗೆ ಖಾಕಿ ಆವಾಜ್ ಗೆ ನಡುರಸ್ತೆಯಲ್ಲಿ ಏಕಾಂಗಿಯಾದ ಗಣಪತಿ ಮೂರ್ತಿ.
ಬೀರೂರು ಪಟ್ಟಣದಲ್ಲಿ ಮಿತ್ರ ಸಮಾಜದಿಂದ ಕೂರಿಸಿದ್ದ ಗಣಪತಿ ಕಳೆದ 71 ವರ್ಷದಿಂದ ಗಣಪತಿ ಹಬ್ಬ ಆಚರಿಸುತ್ತಿರುವ ಜನರು ಗೌರಿ ಹಬ್ಬದಂದು ಕೂರಿಸಿ ದಸರಾಕ್ಕೆ ಬಿಡುವುದು ಇಲ್ಲಿಯ ವಾಡಿಕೆ
ದಸರಾ ಮಾರನೇ ದಿನ ಗಣಪತಿ ಬಿಡುವುದು ಇಲ್ಲಿನ ಜನರ ವಾಡಿಕೆಯಾಗಿದ್ದುಆದರೆ ಇದಕ್ಕೆ ಪೊಲೀಸರಿಂದ ಅಡ್ಡಿ ಹಿನ್ನೆಲೆ ಗಣಪತಿ ಬಿಟ್ಟು ಹೋದ ಭಕ್ತರು
ಡಿಜೆಗೆ ಅವಕಾಶ ಕೊಟ್ರೆ ಮಾತ್ರ ಮೆರವಣಿಗೆ ಮಾಡ್ತೇವೆ ಇಲ್ಲದಿದ್ರೆ ಮೆರವಣಿಗೆ ಮುಂದುವರೆಸಲ್ಲ ಎಂದು ಆಕ್ರೋಶ ಹೀಗಾಗಿ ಸದ್ಯ ರಸ್ತೆಯಲ್ಲಿ ಒಬ್ಬಂಟಿಯಾಗಿರೋ ಗಣಪತಿ.
