ಸಕಲೇಶಪುರದ ವಿದ್ಯಾರ್ಥಿನಿ ದಿಶಾ ಎಂಬುವರು ಎಂಎಸ್ಸಿ ಗಣಿತ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಉಪರಾಷ್ಟ್ರಪತಿಗಳಿಂದ ಚಿನ್ನದ ಪದಕ ಪ್ರಧಾನ ಮಾಡಲಾಗಿದೆ.
ಹೌದು .. ಸಕಲೇಶಪುರ ತಾಲ್ಲೂಕಿನ ಗಾಳಿಗುಡ್ಡ ಶಾಲೆಯ ಶಿಕ್ಷಕಿಯಾಗಿರುವ ದಿಶಾ ಎಂಬುವರು ಎಂಎಸ್ಸಿ ಗಣಿತ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹತ್ತನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ರಿಂದ ದಿಶಾ ಎಚ್ ರೈಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
