ಚಿಕ್ಕಮಗಳೂರು: ಪ್ರವಾಸಿಗರಿದ್ದ ಟೆಂಪೋ ಟ್ರ್ಯಾವೆಲರ್ (ಟಿಟಿ) ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ ಬಳಿ ನಡೆದಿದೆ. ಅದೃಷ್ಟವಶಾತ್ ಟೆಂಪೋದಲ್ಲಿದ್ದ 13 ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಹೌದು .. ಬೆಂಗಳೂರಿನಿಂದ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಬಂದಿದ್ರು. ಮುಳ್ಳಯ್ಯನಗಿರಿ ಇಳಿಜಾರಿನಲ್ಲಿ ಡ್ರೈವರ್ ಗಾಡಿ ಓಡಿಸ್ತಾ ಇರ ಬೇಕಾದ್ರೆ ಚಪ್ಪಲಿ ಬಂದಿದೆ. ಚಪ್ಪಲಿ ಎಲ್ಲಿ ಬ್ರೇಕ್ ಹಾಗೂ ಎಕ್ಸಲೇಟರ್ ಮಧ್ಯೆ ಸಿಕ್ಕಿಕೊಳ್ಳುತ್ತೆ ಅಂತ ಡ್ರೈ ವರ್ ಚಪ್ಪಲಿ ತೆಗೆಯಲು ಹೋಗಿದ್ದಾನೆ. ಆಗ ಟೆಂಪೋ ನ್ಯೂಟ್ರಲ್ ಆಗಿ ಕಂದಕಕ್ಕೆ ಬಿದ್ದಿದೆ. ಯಾರಿಗೂ ಏನು ತೊಂದ್ರೆ ಆಗದೇ ಎಲ್ರೂ ಸೇಫ್ ಆಗಿದ್ದಾರೆ.
ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ದಾಖಲಾಗಿದೆ.
