ಹಾಸನ: ಒಡಿಸ್ಸಾದ ಬಾಲೇಶ್ವರ ಜಿಲ್ಲೆಯ ಸಿಮೂಲಿಯ ವಿಧಾನಸಭಾ ಕ್ಷೇತ್ರಕ್ಕೆ ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ತುಡಿ ಘಡಿಯ ಗ್ರಾಮದಲ್ಲಿ ನಡೆದ ಈದ್ ಮಿಲಾದ್ ಹಬ್ಬದಲ್ಲಿ ಭಾಗವಹಿಸಿದ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್
ಗ್ರಾಮಸ್ಥರು 50 ಮೀಟರ್ ಉದ್ದದ ರಾಷ್ಟ್ರ ಧ್ವಜ ಮೆರವಣಿಗೆ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ ನಮ್ಮದಾಗಿದೆ.
ಮುಸಲ್ಮಾನ ಸಹೋದರರ ದೇಶ ಪ್ರೇಮಕ್ಕೆ ಮನತುಂಬಿ ಬಂತು. ಮುಸ್ಲಿಂ ಸಮುದಾಯದ ಎಲ್ಲರಿಗೂ ಈದ್ ಮಿಲಾದ್ ಶುಭಾಶಯಗಳು ಎಂದರು. ಈ ಹಬ್ಬವು ಎಲ್ಲರ ಬಾಳಲ್ಲಿ ಶಾಂತಿ, ಸಹಾನುಭೂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸುತ್ತೇನೆ. ಎಂದರು
