ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯಲ್ಲಿ ಹೈಟೆಕ್ ನಾಡ ಕಚೇರಿಯನ್ನು ಶೃಂಗೇರಿ ಶಾಸಕ ರಾಜೇಗೌಡ ಅವರು ಉದ್ಘಾಟನೆ ಮಾಡಿದರು. ಈ ವೇಳೆ ವಿನಯ್ ಗುರೂಜಿ ಸಹ ಉಪಸ್ಥಿತರಿದ್ದರು.

ಹೌದು .. ನೋಡಿದ್ರೆ ಕೈ ತೊಳೆದು ಮುಟ್ಟಬೇಕು ಅನ್ನಿಸುತ್ತೆ ಹಾಗಿದೆ, ಈ ನಾಡ ಕಚೇರಿ. ಜಯಪುರ ಹಾಗೂ ಹರಿಹರಪುರ ಹೋಬಳಿಗಳ ಈ ಸುಂದರ, ಸುಸಜ್ಜಿತ ನಾಡ ಕಛೇರಿ ಕಂಡು ಜನ ಫಿದಾ ಆಗಿದ್ದಾರೆ. ಅಂದು ಕೊಟ್ಟ ಮಾತಿನಂತೆ ಜಯಪುರ ಹರಿಹರಪುರದಲ್ಲಿ ತಹಶೀಲ್ದಾರ್ ಲಿಖಿತಾ ಮೋಹನ್ ನಾಡ ಕಚೇರಿ ಕಟ್ಟಿಸಿದ್ದಾರೆ.
ಹೊಸ ಹೈಟೆಕ್ ನಾಡ ಕಚೇರಿಯ ಹಿಂದೇ ಶೃಂಗೇರಿ ಶಾಸಕ ರಾಜೇಗೌಡರ ಶ್ರಮವಿದೆ.ಇಬ್ಬರ ಶ್ರಮಕ್ಕೂ ಇದೀಗ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
