Monday, August 10, 2026
Homeರಾಜಕೀಯಗೀತಾ ಶಿವರಾಜ್‌ ಕುಮಾರ್ ಪರವಾಗಿ ಬೃಹತ್ ಬೈಕ್‌ ರ‍್ಯಾಲಿ..!

ಗೀತಾ ಶಿವರಾಜ್‌ ಕುಮಾರ್ ಪರವಾಗಿ ಬೃಹತ್ ಬೈಕ್‌ ರ‍್ಯಾಲಿ..!

Telegram Group
Join Now

ಲೋಕ ಸಭೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಶಿವಮೊಗ್ಗ ಸೇರಿದಂತೆ ಹಲವಡೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಇಂದು ತೀರ್ಥಹಳ್ಳಿ ವಿಧಾನ ಸಭೆಯ ಗಾಜನೂರಿನಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೂರಾರು ಕಾರ್ಯಕತರು ಬೈಕ್ ರ್ಯಾಲಿ ನಡೆಸಿದ್ದಾರೆ. ಚುನಾವಣೆ ಪ್ರಚಾರಕ್ಕೂ ಮುನ್ನ ತೀರ್ಥಹಳ್ಳಿ ರಸ್ತೆಯ ಕಾನೆಹಳ್ಳಿ ಗ್ರಾಮದ ಚೌಡಮ್ಮ ದೇವಿಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಹಾಗೂ ಕಾರ್ಯಕರ್ತರು ಪ್ರಚಾರಕ್ಕಾಗಿ ಒಂದೆಡೆ ತೆರೆಳಿದರೇ ಇನ್ನುಳಿದ ಕಾರ್ಯಕರ್ತರು ಬೈಕ್‌ ರ್ಯಾಲಿಯಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಶತಾಯಗತಾಯ ಕೈ ಅಭ್ಯರ್ಥಿ ಶಿವಮೊಗ್ಗದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿಗಳು ಲೋಕಸಭೆ ಚುನಾವಣೆ ಗೆಲ್ಲಲು ಟೆಂಪಲ್‌ ರನ್‌ ಮಾಡ್ತಿದ್ರೆ, ಇತ್ತ ಕಾಂಗ್ರೆಸ್‌ ಅಭ್ಯರ್ಥಿಗಳು ಜನಸಾಮನ್ಯರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಅದೇನೆ ಇರಲಿ ಈ ಬಾರಿ ಲೋಕ ಸಭೆ ಚುನಾವಣೆಯಲ್ಲಿ ನಾ ಮುಂದು ತಾ ಮುಂದು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳಿಗೆ ಯಾರ ಪಾಲಿಗೆ ಸಂಸದ ಪಟ್ಟ ಒಲಿಯಲಿದೆ ಎಂದು ಜೂನ್‌ 4 ಚುನಾವಣೆ ಫಲಿತಾಂಶದವರೆಗೂ ಕಾಯಬೇಕಿದೆ.

– ಕಾವ್ಯಶ್ರೀ ಕಲ್ಮನೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments