ಚಿಕ್ಕಮಗಳೂರು ನಗರದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದಾದ್ಯಂತ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿ ಹಾಗೆ ಗಾಳಿ-ಮಳೆ ಹೊಡೆತಕ್ಕೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಹೌದು .. ಕಾಫಿನಾಡು ಮಳೆ ಅಬ್ಬರಕ್ಕೆ ಕಗ್ಗತ್ತಲಲ್ಲಿ ಮುಳುಗಿದೆ. ಕೋಟೆ ಬಡಾವಣೆಯಲ್ಲಿ ಧರೆಗುರುಳಿದ ಮರಗಳು, ಹಾರಿ ಹೋಗಿರುವ ಮೇಲ್ಛಾವಣಿ ಹೆಂಚುಗಳು ಧರೆಗುರುಳಿದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ
ಕೋರ್ಟ್ ಮುಂಭಾಗ ಹತ್ತಾರು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಐಬಿ ಮುಂಭಾಗ ಧರೆಗುರುಳಿದ ಕಾಂಪೌಂಡ್ನ ಗರದಾದ್ಯಂತ ಧರೆಗುರುಳಿರೋ ವಿದ್ಯುತ್ ಕಂಬಗಳು, ಮರಗಳು ಹೀಗಾಗಿ ನಗರದ ಅರ್ಧ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ದೆ.
