ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಮಾತಾನಾಡಿದ ವ್ಯಕ್ತಿಗೆ ಕಾರ್ಯಕರ್ತನೊಬ್ಬ ಹಿಗ್ಗಾಮುಗ್ಗ ಜಾಡಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹೌದು .. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ವಿರುದ್ಧ ಸೋಮವಾರ ಮನು ಎಂಬುವರು ಮಾತನಾಡಿದ್ದರು. ಹೀಗಾಗಿ ಮನು ವಿರುದ್ಧ ಬೆಳಗೋಡು ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಿಡನೂರು ವಿಡಿಯೋ ಮಾಡಿ ಟಾಂಗ್ ಕೊಟ್ಟಿದ್ದಾರೆ.
ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನು ಯಾರ ಪರವಾಗಿ ಕೆಲಸ ಮಾಡಿದ್ದ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಸವಾಲ್ ಸಹ ಹಾಕಿದ್ದಾರೆ.
ಸಿದ್ದೇಶ್ ನಾಗೇಂದ್ರರವರ ಅವಧಿಯಲ್ಲಿ ಪಕ್ಷ ಬಲಿಷ್ಠವಾಗಿದ್ದು ತಮ್ಮ ಪ್ರತಿಷ್ಠಾನದ ಮೂಲಕ ಹಲವಾರು ಸೇವಾ ಕಾರ್ಯ ಮಾಡುತ್ತಿದ್ದೂ ಅಂತವರ ವಿರುದ್ಧ ಅಪಪ್ರಚಾರ ಸಲ್ಲದು ಎಂದ ಪ್ರದೀಪ್ ತಿಳಿಸಿದ್ದಾರೆ.
