ಗುಬ್ಬಿಬೈಲು: ಶ್ರೀ ಚೌಡೇಶ್ವರಿ ಹಾಗೂ ನಾಗ ಸಾನಿಧ್ಯ ದೇವಾಲಯದ, ಜೀರ್ಣೋದ್ದಾರ ಕಟ್ಟಡದ ಭೂಮಿ ಪೂಜೆಯನ್ನು ಶೃಂಗೇರಿ ಶ್ರೀ ಮಠದ ಪೂಜ್ಯರ ಆಪ್ತ ಸಹಾಯಕರಾದ ಕೃಷ್ಣಮೂರ್ತಿಯವರು ನೆರವೇರಿಸಿ ಉಭಯ ಜಗದ್ಗುರುಗಳ ಶುಭ ಆಶೀರ್ವಾದವನ್ನು ತಿಳಿಸಿದರು

ನಂತರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಅರವಿಂದ ಸೋಮಯಾಜಿ ಪ್ರಮುಖ ಉಪನ್ಯಾಸಕರಾಗಿ ಭಾಗವಹಿಸಿ, ರಾಷ್ಟ್ರೀಯ ಪ್ರಜ್ಞೆ ಹಾಗೂ ದೇವಾಲಯಗಳ ಪಾತ್ರದ ಬಗ್ಗೆ ವಿವರಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ನಾರಾಯಣ, ಸದಸ್ಯರಾದ ಸಂದೇಶ್, ರವಿ ಡ್ರಾವಿಡ, ಸದಾಶಿವ, ಶಿವು, ಕುಮಾರ್, ಲೋಕೇಶ್, ರವಿ ಹಾಗೂ ಪ್ರಮುಖರಾದ ಜಯವಂತ ಭಟ್, ಗಣೇಶ್ ಅಂಬಾ ಜೂವೆಲ್ಲರ್, ನರೇಂದ್ರ, ಶ್ರೀನಿವಾಸ್, ಪಣಿರಾಜ್,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸತೀಶ್, ದಿನೇಶ್ ಹೊಸೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
